Saturday, February 4, 2017

ಸೂರ್ಯೋಪಾಸನೆಯಿಂದ ಶಾರೀರಿಕ ಬಲಸಂವರ್ಧನೆ, ಮಾನಸಿಕ ಪ್ರಸನ್ನತೆ ಉಂಟಾಗುತ್ತದೆ. 

                              - ಡಾ|| ರಾಘವೇಂದ್ರ ಗುರೂಜಿ



ದಾವಣಗೆರೆ. ಫೆ, 3

ಮಾಘ ಮಾಸ ಶುಕ್ಲ ಪಕ್ಷದ ಸಪ್ತಮೀ ದಿನದಂದು ಆಚರಿಸುವ ರಥಸಪ್ತಮಿ ವೇದಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸೂರ್ಯೋಪಾಸನೆಯ ಹಬ್ಬವಾಗಿದ್ಗು ಇದರಿಂದ ಶಾರೀರಿಕ ಬಲಸಂವರ್ಧನೆ ಮತ್ತು ಮಾನಸಿಕ ಪ್ರಸನ್ನತೆ ಉಂಟಾಗಿ, ಉಲ್ಲಾಸ, ಉತ್ಸಾಹಗಳು ಮನಸ್ಸಿಗಾಗುತ್ತದೆ ಎಂದು ಯೋಗಗುರು  ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.

ಅವರು ಇಂದು ಬೆಳಿಗ್ಗೆ, ನಗರದ ದೇವರಾಜ ಅರಸ್ ಬಡಾವಣೆಯ, ಸಿ'ಬ್ಲಾಕ ನಲ್ಲಿರುವ, ಆದರ್ಶ ಯೋಗ ಪ್ರತಿಷ್ಠಾನ (ರಿ)  ಅಡಿಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಶ್ರೀ ಮಹಾಮಾಯಿ ವಿಶ್ವಯೋಗಮಂದಿರ ಹಾಗು ಯೋಗತಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ, ರಥಸಪ್ತಮಿ-ಸೂರ್ಯೋಪಾಸನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿಗರು.

ಸೂರ್ಯ ಆರೋಗ್ಯದಾತ ಆದ್ದರಿಂದ ಅವನನ್ನು "ಆರೋಗ್ಯಂ ಭಾಸ್ಕರಾಧಿಚ್ಚೇತ್" ಎಂದು ಪ್ರಾರ್ಥಿಸಿದೆ, ದಿನಂಪ್ರತಿ ಸೂರ್ಯನಮಸ್ಕಾರ ಮಾಡುವುದರಿಂದ ಸರ್ವರೋಗ ನಿವಾರಣೆಯಾಗಿ ಆಯುಷ್ಯವು ವೃದ್ಧಿ ಯಾಗುತ್ತದೆ, ಪ್ರತಿದಿನ ತಪ್ಪದೇ, 108 ಸೂರ್ಯನಮಸ್ಕಾರವನ್ನು ಮಾಡುತಿದ್ದ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು 106 ವರ್ಷ ಬದುಕಿ ತೋರಿಸಿದ ನಿದರ್ಶನವು ಇದಕ್ಕೆ ಸಾಕ್ಷಿ ಎಂದರು.

ರಥಸಪ್ತಮಿ ದಿನದಂದು ತಮ್ಮ ತಮ್ಮ ಮನೆಗಳಲ್ಲಿ ಹಾಲು ಉಕ್ಕಿಸುವುದರಿಂದ ಮನೆಯ ಉತ್ತರೋತ್ತರ ಅಭೀವೃದ್ಧಿ ಅಗಲಿದೆ ಎಂದು ತಿಳಿಸುತ್ತಾ ರಥಸಪ್ತಮಿಯ ವಿಶೇಷತೆಯನ್ನು ಸರಳವಾಗಿ ತಿಳಿಸಿದರು.

ಅಬಾಲವೃದ್ಧರಾದಿಯಾಗಿ ನೆರೆದಿದ್ದ ನೂರಕ್ಕೂ ಹೆಚ್ಚು ಯೋಗಸಾಧಕರು ಶತನಾಮಾವಳಿಗಳೊಂದಿಗೆ 108 ಸುತ್ತಿನ ಸೂರ್ಯನಮಸ್ಕಾರ ಯೋಗಪದ್ದತಿಯನ್ನು ಪ್ರದರ್ಶಿಸಿ ಶ್ರೀಸೂರ್ಯನಾರಾಯಣನ ಕೃಪೆಗೆ ಪಾತ್ರರಾದರು, ಹೂವಿನ ಅಲಂಕಾರ ಸೇವೆಯನ್ನು ಹರಿಹರದ‌ ಕಾರ್ಯಪಾಲಕ ಅಭಿಯಂತರರಾದ  ಲಕ್ಷ್ಮಣ್ ಹೆಚ್, ಪ್ರಸಾದ ಸೇವೆಯನ್ನು ಪತಂಜಲಿ ಯೋಗಪೀಠದ ರೂವಾರಿ ಮಾಧವ ರಾವ್ ಏಕಭೋಟೆಯವರು ಅರ್ಪಿಸಿದರು, ರಾಹುಲ್ ವಿ.ಕೆ, ಅನೀಲ್ ಕುಮಾರ್ ರಾಯ್ಕರ್, ಬಾಳೆ ಎಲೆ ವ್ಯಾಪಾರಿ ರುದ್ರೆಶ್ ಪಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜಿ.ಪಂ, ಅಭಿಯಂತರುಗಳಾದ ಜಿ. ಪರಮೇಶ್ವರಪ್ಪ, ಬಿ.ಸಿ. ಪುರುಷೋತ್ತಮ,  ಜೆ. ಮಲ್ಲೆಶಪ್ಪ, ಬಿ. ಪುಟ್ಟಸ್ವಾಮಿ ಹಾಗು ವ್ಯಾಪಾರಿ ರಾಜೂ ಕಡೆಕೊಪ್ಪ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಕಾರ್ಯಕ್ರಮದ ಕೊನೆಯಲ್ಲಿ ಮಂಗಳಾರತಿ, ಶಾಂತಿಮಂತ್ರ, ಪ್ರಸಾದ ವಿನಿಯೋಗದೊಂದಿಗೆ ಸಂಪನ್ನಗೊಂಡಿತು.


No comments:

Post a Comment