Monday, September 19, 2016

ಯೋಗ ಫ್ಯಾಷನ್‍ಗಾಗಿ ಅಲ್ಲ ಇದೊಂದು ನಿತ್ಯಾನುಷ್ಠಾನ ಕಲೆ

ಯೋಗ ಫ್ಯಾಷನ್‍ಗಾಗಿ ಅಲ್ಲ ಇದೊಂದು ನಿತ್ಯಾನುಷ್ಠಾನ ಕಲೆ.
ಪೂಜ್ಯಶ್ರೀ ಕರುಣಾಕರ ಜೀ.
ದಾವಣಗೆರೆ.ಸೆ.5.

ಮನುಷ್ಯನಿಗೆ ಆಹಾರ, ನೀರು, ಗಾಳಿ ಎಷ್ಟು ಮುಖ್ಯವೋ ಅಷ್ಠೇ ಮುಖ್ಯ ಶರೀರದ ಆರೋಗ್ಯ, ಆರೋಗ್ಯವಿದ್ದರೆ ಸದಾ ಆನಂದವಾಗಿರಬಹುದು.  ಕೆಲವರು ಕೇವಲ ಫ್ಯಾಷನ್‍ಗಾಗಿ ಯೋಗ ಶಿಬಿರಗಳಿಗೆ ಬಂದು ನಂತರ ಅಭ್ಯಾಸವನ್ನು ಬಿಟ್ಟು ಬಿಡುತ್ತಾರೆ. ಇದು ಸರಿಯಲ್ಲ. ಯೋಗ ಫ್ಯಾಷನ್‍ಗಾಗಿ ಅಲ್ಲ. ಇದೊಂದು ಪ್ರತಿನಿತ್ಯ ಮಾಡುವ ಅನುಷ್ಠಾನದ ಆರೋಗ್ಯಕಲೆ ಎಂದು ಪುತ್ತೂರಿನ ಓಂಕಾರ ಯೋಗ ಚಿಕಿತ್ಸಾ ಮಂದಿರದ ಹಿರಿಯ ಯೋಗಾಚಾರ್ಯ ಪೂಜ್ಯಶ್ರೀ ಕರುಣಾಕರ್ ಜೀ ಇವರು ಅಭಿಪ್ರಾಯ ಪಟ್ಟರು.

ಅವರು ಇಂದು ಸಂಜೆ ದೇವರಾಜ್ ಅರಸ್ ಬಡಾವಣೆಯ ‘ಸಿ’ ಬ್ಲಾಕ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸರಳಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.

ಸಾಮಾನ್ಯವಾಗಿ ಆಸನಗಳನ್ನು ಮಾಡಿದ ನಂತರ ಶರೀರಭಾಧೆ ಹೆಚ್ಚಾಗಿ ಉಸಿರಾಟ ನಿಯಂತ್ರಣದಲ್ಲಿ ಬರಲು ಸಮಯಬೇಕು.  ಆದರೆ ಪರಿಕರಗಳನ್ನು ಉಪಯೋಗಿಸಿ ಅಭ್ಯಾಸ ಮಾಡಿದಲ್ಲಿ ಆ ತಕ್ಷಣವೇ ಪರಿಣಾಮ ಕಾಣಬಹುದು. ಮತ್ತು ಶರೀರ ಲಘುವಾಗಿ ಉಸಿರಾಟ ಸಹಜವಾಗುವುದು. ಇದು ಯೋಗ ಚಿಕಿತ್ಸಾ ಪದ್ಧತಿಯಲ್ಲಿ ಕಂಡು ಬರುವ ಉತ್ತಮ ಫಲಿತಾಂಶ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವರ್ತಕರು ಹಾಗೂ ಜಿಲ್ಲಾಯೋಗ ಒಕ್ಕೂಟದ ಅಧ್ಯಕ್ಷರೂ ಆದ.ಬಿ.ಸಿ.ಉಮಾಪತಿಯವರು ಮಾತನಾಡಿ ಯೋಗ ಭಾರತೀಯ ಕಲೆ. ಇಂದು ವಿದೇಶಿಯರು ಹೆಚ್ಚೆಚ್ಚು ಕಲಿಯುತ್ತಿದ್ದಾರೆ. ಯೋಗಕ್ಕೆ ಬಹಳ ಮಹತ್ವವಿದೆ. ಪರಿಕರಗಳ ಜೊತೆಗೆ ಯೋಗಾಭ್ಯಾಸವನ್ನು ಮಾಡಿದಾಗ ಶರೀರದ ನರಗಳು ಹಗುರವಾಗಿ ಆರಾಮ ಅನಿಸುತ್ತದೆ. 1980 ರಲ್ಲಿ ನಾವು ಮತ್ತು ಡಾ||ರಾಘವೇಂದ್ರ ಗುರೂಜಿಯವರು ಮಲ್ಲಾಡಿಹಳ್ಳಿಗೆ ಹೋಗಿ ಶ್ರೀ ಸ್ವಾಮೀಜಿಯವರನ್ನು ಭೇಟಿ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಮತ್ತು ಶಿಬಿರದಲ್ಲಿ ಕಷ್ಟಕರವಾದ ಶೀರ್ಷಾಸನ, ಸರ್ವಾಂಗಾಸನವನ್ನು ಹಗ್ಗ, ದಿಂಬು ಮತ್ತು ಕುರ್ಚಿಗಳ ಸಹಾಯದೊಂದಿಗೆ ಅತ್ಯಂತ ಸುಲಭವಾಗಿ ಮಾಡಿದಾಗ ಅನುಭವಿಸಿದ ಆನಂದವನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ರಾಘವೇಂದ್ರ ಗುರೂಜಿಯವರು ಬಹಳ ವ್ಯವಸ್ಥಿತವಾಗಿ ಯೋಗಚಿಕಿತ್ಸಾ ಮಂದಿರವನ್ನು ನಿರ್ಮಿಸಿದ್ದಾರೆ. ಇದೊಂದು ಉತ್ತಮ ಆಸ್ಪತ್ರೆ ಎಂದರೆ ತಪ್ಪಾಗಲಾರದು. ಇದರ ಲಾಭವನ್ನು ನಗರದ ಜನತೆ ಸದುಪಯೋಗಪಡಿಸಿಕೊಳ್ಳಲಿ ಎಂದರು.

ಶಿಬಿರಾರ್ಥಿಗಳಾದ ಶ್ರೀಮತಿವನಜಾಕ್ಷಿ ಪುಟ್ಟಲಿಂಗಾಚಾರ್, ಡಾ||ನಾಗರಾಜಾಚಾರ್, ಶಿವಾನಂದ ಸ್ವಾಮಿ, ಯೋಗ ಶಿಕ್ಷಕರುಗಳಾದ ತಿಪ್ಪೇಸ್ವಾಮಿ ಭರಮಸಾಗರ, ಎನ್.ವಿ.ಸುನೀಲ್ ಕುಮಾರ್, ಶ್ರೀಮತಿ ಅಂಜಲೀದೇವಿ, ಕಲಾಶಾಲೆಯ ಹನುಮಂತಾಚಾರ್, ಉಮಾಹಿರೇಮಠ್ ಮತ್ತಿತರರು ಶಿಬಿರದ ಅನುಭವವನ್ನು ಹಂಚಿಕೊಂಡರು. ಪ್ರಸಿದ್ಧ ಹಿರಿಯ ಯೋಗಾಚಾರ್ಯ ಕರುಣಾಕರ್ ಜೀ ಯವರಿಗೆ ಶಾಲು ಹೊದಿಸಿ ಗೌರವಿಸಿ ಶಿಬಿರಾರ್ಥಿಗಳೆಲ್ಲರೂ ಎದ್ದುನಿಂತು ಸಾಷ್ಟಾಂಗ ನಮಸ್ಕಾರಗಳೊಂದಿಗೆ ಗುರುವಂದನೆಯನ್ನು ಸಲ್ಲಿಸಿದರು.

ಆದರ್ಶ ಯೋಗ ಪ್ರತಿಷ್ಠಾನದ ಯೋಗಗುರು ಡಾ||ರಾಘವೇಂದ್ರ ಗುರೂಜಿ ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ವಂದಿಸಿದರು. ಅನಿಲ್ ಕುಮಾರ್ ರಾಯ್ಕರ್, ಶಂಭುಲಿಂಗಯ್ಯ ಹಿರೇಮಠ್, ಜಗದೀಶ್, ರಾಹುಲ್, ಚಿದಾನಂದ, ಸಂಪತ್‍ಕುಮಾರ್, ಸಿದ್ದಲಿಂಗಸ್ವಾಮಿ ಇನ್ನಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನಂತರ ಶಾಂತಿಮಂತ್ರದೊಂದಿಗೆ ಸಹಭೋಜನ ಮಾಡಿದ ನಂತರ ಕಾರ್ಯಕ್ರಮವು ಸಂಪನ್ನಗೊಂಡಿತು.

ಇತೀ ಭಗವತ್ ಸೇವೆಯಲ್ಲಿ ನಿಮ್ಮವನಾದ


ಡಾ||ರಾಘವೇಂದ್ರ ಗುರೂಜಿ



No comments:

Post a Comment